ಭಾರತೀಯ ಆಟಗಾರರು ಆಡುವುದು ದಾಖಲೆಗಾಗಿ, ತಂಡಕ್ಕಾಗಿ ಅಲ್ಲ: ಇಂಝಮಾಮ್ ಉಲ್ ಹಕ್
ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಣಿಗೆ ಸಂಗ್ರಹಕ್ಕಾಗಿ ಖಾಲಿ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಆಡಿಸಬೇಕು ಎಂದಿದ್ದ ಶೋಯಬ್ ಅಖ್ತರ್ ಹೇಳಿಕೆಗೆ ಇತ್ತೀಚೆಗಷ್ಟೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಪಿಲ್ ದೇವ್ ಖಾರವಾಗಿ ತಿರುಗೇಟು ನೀಡಿದ್ದರು.
ಸದ್ಯ ಭಾರತ- ಪಾಕಿಸ್ತಾನ ನಡುವೆ ಯಾವುದೇ ಕಾರಣಕ್ಕೂ ಪಂದ್ಯ ನಡೆಯಲು ಸಾಧ್ಯವಿಲ್ಲ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ. ‘ಲಾಹೋರ್ನಲ್ಲಿ ಹಿಮಪಾತ ಆಗಬಹುದು. ಆದರೆ, ಇಂಡೋ- ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.
ಇತ್ತೀಚೆಗಷ್ಟೆ ಅಖ್ತರ್ ಅವರು, ‘ಭಾರತ-ಪಾಕ್ನಲ್ಲಿ ಕೋವಿಡ್ 19 ವೈರಸ್ ತಾಂಡವವಾಡುತ್ತಿದೆ. ಸಾವಿರಾರು ಜನರಿಗೆ ತೊಂದರೆಯಾಗಿದೆ. ಹೀಗಾಗಿ ಭಾರತ-ಪಾಕ್ ನಡುವೆ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿ ನಡೆಸಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಈ ಪಂದ್ಯಕ್ಕೆ ಸಾಕಷ್ಟು ವೀಕ್ಷಕರು ಸಿಗುತ್ತಾರೆ. ಇದರಿಂದ ಸಂಗ್ರಹವಾಗುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಅದನ್ನು ಎರಡೂ ದೇಶಗಳು ಸಮವಾಗಿ ಬಳಸಿಕೊಳ್ಳಬಹುದು’ ಎಂಬ ಸಲಹೆಯನ್ನು ಅಖ್ತರ್ ನೀಡಿದ್ದರು.
ಆದರೆ, ಅಖ್ತರ್ ಈ ಹೇಳಿಕೆ ನೀಡಿದ ಬೆನ್ನಲ್ಲೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗರಂ ಆಗಿದ್ದರು. ‘ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಅನ್ನು ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಭಾರತಕ್ಕೆ ಈಗ ಹಣದ ಅವಶ್ಯಕತೆಯಿಲ್ಲ ಮತ್ತು ಕ್ರಿಕೆಟ್ಗೋಸ್ಕರ ಪ್ರಾಣವನ್ನು ಪಣಕ್ಕಿಡುವ ಅವಶ್ಯಕತೆಯಿಲ್ಲ. ನಮ್ಮಲ್ಲಿ ಸಾಕಷ್ಟು ಆರ್ಥಿಕ ಸಂಪನ್ಮೂಲಗಳಿವೆ. ಬಿಸಿಸಿಐ ಈಗಾಗಲೇ (51 ಲಕ್ಷ ರೂ.) ಧನ ಸಹಾಯ ಮಾಡಿದೆ. ಅಗತ್ಯವಿದ್ದರೆ ಇನ್ನಷ್ಟು ನೆರವಾಗುವ ಸಾಮರ್ಥ್ಯ ಬಿಸಿಸಿಐಗಿದೆ’ ಎಂದು ಕಪಿಲ್ ನುಡಿದಿದ್ದರು.