EBM News Kannada
Leading News Portal in Kannada

Mask Up: ‘ಅವನೇ ಶ್ರೀಮನ್ನಾರಾಯಣ‘ ಹಾಡು ಬಳಸಿ ಕೊರೋನಾ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಸಿಟಿ ಪೊಲೀಸರು

0

ಕೊರೋನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರು ಸಿಟಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸದ್ಯ ಸಿನಿಮಾ ಹಾಡುಗಳನ್ನು ಬಳಸಿಕೊಂಡು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಪೋಸ್ಟರ್​ ಮೂಲಕ ತಿಳಿಸಿದ್ದಾರೆ.

ರಕ್ಷಿತ್​ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ‘ ಸಿನಿಮಾದಲ್ಲಿನ ‘ಚರಿತ್ರೆ ಸೃಷ್ಠಿಸುವ ಅವತಾರ‘ ಹಾಡನ್ನು ಬಳಸಿಕೊಂಡು ಕೊರೋನಾ ಕುರಿತು ಜಾಗೃತಿ ಮೂಡಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಸಿಟಿ ಪೊಲೀಸ್​​ ಟ್ವೀಟ್​ ಕೂಡ ಮಾಡಿದ್ದು, ಇದು ಚರಿತ್ರೆ ಸೃಷ್ಠಿಸೊ ಅವತಾರ, ಮಾಸ್ಕ್​ ಅಪ್​​ ಅದುವೆ ಸಿದ್ಧಾಂತ, ಹ್ಯಾಂಡ್​​​ ವಾಷ್​​​, ಈಗಿನ ವೇದಾಂತ ಎಂದು ಹೇಳಿದ್ದಾರೆ. ಇನ್ನು ಪೋಸ್ಟರ್​ನಲ್ಲಿ ‘ಕೇಳಿ ಕಾದಿರುವ ಬಾಂಧವರೇ, ಭುವಿಯಲ್ಲಿ ಕೊರೋನಾ ಅರಿತವರೇ, ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ, ಹೊರ ಬಂದರೇ ಅಷ್ಟೇ ಎಂದು ಬೆಂಗಳೂರು ಸಿಟಿ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ನಟ ರಕ್ಷಿತ್​ ಶೆಟ್ಟಿಗು ಕೂಡ ಟ್ಯಾಗ್​ ಮಾಡಿದ್ದಾರೆ.

Leave A Reply

Your email address will not be published.