ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಮೇಲೆ ಗುಂಡಿನ ದಾಳಿ ನಡೆಯುವುದಕ್ಕೂ ಕೆಲ ದಿನಗಳ ಹಿಂದೆ ಅವರ ಪುತ್ರ ಹಾಗೂ ಕಾಂಗ್ರೆಸ್ ಶಾಸಕ ಝೀಶನ್ ಗೂ ಬೆದರಿಕೆ ಕರೆ ಬಂದಿತ್ತು ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಝೀಶನ್ ಹಾಗೂ ಬಾಬಾ ಸಿದ್ದಿಕ್ ಇಬ್ಬರೂ ನಮ್ಮ ಗುರಿಯಾಗಿದ್ದರು ಹಾಗೂ ಅವರಿಬ್ಬರ ಪೈಕಿ ಯಾರೇ ಕಂಡರೂ ಗುಂಡು ಹಾರಿಸುವಂತೆ ಆದೇಶಿಸಲಾಗಿತ್ತು ಎಂದು ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ತಿಳಿಸಿದ್ದಾರೆ.