EBM News Kannada
Leading News Portal in Kannada

ಮುಂಬೈ | ಮುಂಬರುವ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಅಲಭ್ಯ | Mumbai

0


ಮುಂಬೈ : ಅಗರ್ತಲದಲ್ಲಿ ನಡೆಯಲಿರುವ ತ್ರಿಪುರಾ ವಿರುದ್ಧದ ಮುಂಬರುವ ರಣಜಿ ಪಂದ್ಯದಲ್ಲಿ ಮುಂಬೈ ಕ್ರಿಕೆಟ್ ತಂಡದಿಂದ ಶ್ರೇಯಸ್ ಅಯ್ಯರ್ ಹೊರಗುಳಿಯಲಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಸ್ವಲ್ಪ ಸಮಯ ವಿರಾಮ ನೀಡುವಂತೆ ಮುಂಬೈ ಸೀನಿಯರ್ ಪುರುಷರ ಆಯ್ಕೆ ಸಮಿತಿಗೆ ಅಯ್ಯರ್ ವಿನಂತಿಸಿದ್ದಾರೆ. ಅಯ್ಯರ್ ಮನವಿಯನ್ನು ಸ್ವೀಕರಿಸಲಾಗಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯ ಹಿರಿಯ ಅಧಿಕಾರಿ ಪಿಟಿಐಗೆ ಬುಧವಾರ ತಿಳಿಸಿದ್ದಾರೆ.

ಅಯ್ಯರ್ ಈ ಋತುವಿನಲ್ಲಿ ಮುಂಬೈನ ಪರ ಮೊದಲ ಮೂರು ದೇಶೀಯ ಪಂದ್ಯಗಳನ್ನು ಆಡಿದ್ದಾರೆ. ಅರ್ಧಶತಕ ಗಳಿಸಿ ಮುಂಬೈ ತಂಡ ಇರಾನಿ ಟ್ರೋಫಿ ಎತ್ತಿ ಹಿಡಿಯಲು ನೆರವಾಗಿದ್ದ ಅಯ್ಯರ್ ಮಹಾರಾಷ್ಟ್ರ ವಿರುದ್ಧದ ತನ್ನ 2ನೇ ರಣಜಿ ಪಂದ್ಯದಲ್ಲಿ 142 ರನ್ ಗಳಿಸಿದ್ದರು.

ಮುಂಬೈ ಕ್ರಿಕೆಟ್ ತಂಡವು ತ್ರಿಪುರಾ ವಿರುದ್ಧದ ಪಂದ್ಯದಿಂದ ಪೃಥ್ವಿ ಶಾರನ್ನು ಕೈಬಿಟ್ಟಿದೆ. ಮಧ್ಯಮ ಸರದಿಯ ಬ್ಯಾಟರ್ ಹಾಗೂ ಭಾರತ ಕ್ರಿಕೆಟ್ ತಂಡ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದೆ.

ಮುಂಬೈ ರಣಜಿ ತಂಡ: ಅಜಿಂಕ್ಯ ರಹಾನೆ(ನಾಯಕ), ಆಯುಷ್ ಮ್ಹಾತ್ರೆ, ಎ.ರಘುವಂಶಿ, ಅಖಿಲ್ ಹೆರ್ವಾಡ್ಕರ್, ಸಿದ್ದೇಶ್ ಲಾಡ್, ಸೂರ‍್ಯಾಂಶ್ ಶೆಡ್ಗೆ, ಹಾರ್ದಿಕ್ ಟಾಮೋರ್(ವಿಕೆಟ್‌ ಕೀಪರ್), ಸಿದ್ದಾಂತ್(ವಿಕೆಟ್‌ ಕೀಪರ್), ಶಮ್ಸ್ ಮುಲಾನಿ, ಕಾರ್ಷ್ ಕೊಠಾರಿ, ಹಿಮಾಂಶು ಸಿಂಗ್, ಶಾರ್ದೂಲ್ ಠಾಕೂರ್, ಮೋಹಿತ್ ಅವಸ್ಥಿ, ಜುನೈದ್ ಖಾನ್ ಹಾಗೂ ರಾಯ್‌ಸ್ಟನ್ ಡಯಾಸ್.

Leave A Reply

Your email address will not be published.