EBM News Kannada
Leading News Portal in Kannada

ಸಂಸತ್ ಭವನದಲ್ಲಿ ಘಮ ಘಮಿಸಿದ ಉಡುಪಿ ಊಟ, ಬಾಳೆ ಎಲೆಯಲ್ಲಿ ಸವಿದ ಪ್ರಧಾನಿ ನರೇಂದ್ರ ಮೋದಿ – Kannada News | PM Narednra Modi savours Udupi style lunch In parliament

0


ಅತ್ಯಂತ ರುಚಿಕರ ಉಡುಪಿ ಅಡುಗೆ ಸಂಸತ್ತಿನಲ್ಲಿ ಘಮಘಮಿಸಿದ್ದು, ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಸವಿದಿದ್ದಾರೆ.

ಉಡುಪಿ.ನವದೆಹಲಿ, (ಆಗಸ್ಟ್ 08): ಉಡುಪಿ (Udupi) ಶೈಲಿಯ ಆಹಾರ ಎಷ್ಟು ರುಚಿ ಅಂತ ಈಗ ದಿಲ್ಲಿಯವರೆಗೂ ಗೊತ್ತಾಗಿದೆ. ಹೌದು.. ಉಡುಪಿಯ ಸಾಂಪ್ರದಾಯಿಕ ಆಹಾರ (Udupi Style Food) ದೇಶದ ಶಕ್ತಿ ಕೇಂದ್ರ ಸಂಸತ್ತಿನಲ್ಲಿ(parliament) ಘಮಿ ಘಮಿಸಿವೆ. .ಆಗಸ್ಟ್ 03ರಂದು ಸಂಸತ್ ಭವನದ ಒಳಾಂಗಣದಲ್ಲಿ ನಡೆದ ಎನ್​ಡಿಎ ಸಂಸದರ ಸಭೆಯ ನಂತರ ಏರ್ಪಡಿಸಲಾಗಿದ್ದ ಭೋಜನಕೂಟದಲ್ಲಿ ಉಡುಪಿ ಖಾದ್ಯಗಳನ್ನು ತಯಾರಿಸಲಾಗಿದ್ದು,  ಸ್ವತಃ ಪ್ರಧಾನಿ ನರೇಂದ್ರ ಮೋದಿ ಸವಿದಿದ್ದಾರೆ.

ಉಡುಪಿ ಸಾರು, ಪತ್ರೊಡೆ, ಸುಕುರುಂಡೆ, ಹಲಸಿನ ಹಣ್ಣಿನ ಗಟ್ಟಿ, ತಿಮರೆ ಚಟ್ನಿ ಮೊದಲಾದ ಆಹಾರವನ್ನು ತಯಾರಿಸಲಾಗಿದ್ದು, ಅದನ್ನು ಮೋದಿ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಎನ್​ಡಿಎ ಸಂಸದರು ರುಚಿ ನೋಡಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನ ಕೆಲವು ಖಾದ್ಯಗಳ ಭೋಜವನ್ನು ಸವಿದಿರುವ ಬಗ್ಗೆ ಮೋದಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು.

ಉಡುಪಿಯ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ದೆಹಲಿಗೆ ತೆರಳಿ ಉಡುಪಿ ಅಡುಗೆಯನ್ನು ಸಿದ್ಧಪಡಿಸಿದ್ದರು. ಸುಬ್ರಹ್ಮಣ್ಯರ ಜೊತೆ ಸಹಾಯಕರಾಗಿ ರಾಜಶೇಖರ್ ತೆರಳಿದ್ದರು. ಇನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಸುಬ್ರಹ್ಮಣ್ಯರ ಅಡುಗೆಯ ರುಚಿ ಪ್ರಶಂಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Leave A Reply

Your email address will not be published.