EBM News Kannada
Leading News Portal in Kannada

ಕೊರೋನಾ ನಿಮ್ಮ ಧರ್ಮ ಮತ್ತು ಜಾತಿ ಕೇಳಿ ಬರೋದಿಲ್ಲ: ಪಾದರಾಯನಪುರ ಗಲಭೆಗೆ ಸಂಸದ ತೇಜಸ್ವಿ ಸೂರ್ಯ ಖಂಡನೆ

0

ಬೆಂಗಳೂರು(ಏ.20): ಭಾನುವಾರ ಪಾದರಾಯನಪುರದಲ್ಲಿ ನಡೆದ ಘಟನೆ ಖಂಡನೀಯ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ನಿಜಾಮುದ್ದೀನ್​​​ನಲ್ಲಿ ನಡೆದ ತಬ್ಲಿಘಿ ಜಮಾತ್​​ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಜನ ಪಾದರಾಯನಪುರದಲ್ಲಿ ಇದ್ದಾರೆ. ಇದನ್ನು ತಪಾಸಣೆ ಮಾಡುತ್ತಿದ್ದಾಗ ಹೀಗೆ ನಡೆದಿದೆ ಎಂದರು.

ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದವರಿಂದಲೇ ರಾಜ್ಯದಲ್ಲಿ ಶೇ.30ರಷ್ಟು ಕೊರೋನಾ ಪಾಸಿಟಿವ್​​ ಪ್ರಕರಣಗಳು ಬಂದಿರುವುದು. ಹೀಗಾಗಿ ಇಲ್ಲಿನ ಪಾದರಾಯನಪುರದಲ್ಲಿ ಯಾರಿದ್ದಾರೋ ಎಂದು ಪೊಲೀಸರು ನೋಡಲು ಹೋದಾಗ ಹೀಗಾಗಿದೆ. ಇದರ ಹಿಂದೆ ಯಾರೇ ಇರಲಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಪೊಲೀಸ್​​ ಆಯುಕ್ತರಿಗೆ ತೇಜಸ್ವಿ ಸೂರ್ಯ ಮನವಿ ಮಾಡಿದರು.

ಕೊರೋನಾ ವೈರಸ್​ ಯಾವುದೇ ಜಾತಿ, ಧರ್ಮಕ್ಕೆ ಬರುವ ಖಾಯಿಲೇ ಅಲ್ಲ. ಒಂದು ತಿಂಗಳಿಂದ ಲಾಕ್​ಡೌನ್​​ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ಮನೆಗೂ ಹೋಗಿ ಮನವಿ ಮಾಡಲು ಸಾಧ್ಯವಿಲ್ಲ. ಆದರೂ, ಕ್ಷೇತ್ರದಲ್ಲಿ ಕೊರೋನಾ ವೈರಸ್​​ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಕೆಲಸ ಶಾಸಕ ಜಮೀರ್​​ ಅಹಮ್ಮದ್​​ ಮಾಡಲಿ ಎಂದು ಕೇಳಿಕೊಂಡರು.

ಭಾನುವಾರ ರಾತ್ರಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಕರೆದುಕೊಂಡು ಹೋಗುತ್ತಿದ್ದಾಗ ನಡೆದ ಗಲಾಟೆ ನಡೆದಿದೆ. ಈ ಪ್ರಕರಣ ಸಂಬಂಧ ಐದು ಎಫ್‌ಐಆರ್‌ ದಾಖಲಾಗಿದೆ. ನಾವು ಲಾಠಿಯನ್ನು ತ್ಯಾಗ ಮಾಡಿಲ್ಲ. ಆದರೀಗ ಬಳಸುತ್ತಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ ಬಳಸುತ್ತೇವೆ. ತನಿಖಾ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್​​ ಕಮೀಷನರ್​​ ಹೇಳಿದ್ದಾರೆ.

Leave A Reply

Your email address will not be published.