EBM News Kannada
Leading News Portal in Kannada

ಡಿಕೆಶಿ ಅವರಿಗೆ ಈ ಹಿಂದೆ ಲೂಟಿ ಮಾಡಿ ಅಭ್ಯಾಸ ಇದೆ; ಕಿಡಿಕಾರಿದ ಸಚಿವ ಕೆ.ಎಸ್‌. ಈಶ್ವರಪ್ಪ

0

ಚಿಕ್ಕಬಳ್ಳಾಪುರ (ಏಪ್ರಿಲ್ 27); ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಈ ಹಿಂದೆ ಲೂಟಿ ಮಾಡಿ ಅಭ್ಯಾಸ ಇದೆ ಅದಕ್ಕೆ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದ್ದಾರೆ.

ನರೇಗಾ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದೆ ಹಳ್ಳಿ ಭಾಗದ ಕೃಷಿ ಕೂಲಿಗಳಿಗೆ ಅನ್ಯಾಯವೆಸಗಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ರಾಜ್ಯ ಬಿಜೆಪಿ ಸರ್ಕಾ‌ರ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದ ಕಿಡಿಕಾರಿದ್ದರು. ಇದಕ್ಕೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಚೀಮನಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ,

“ಡಿ.ಕೆ.ಶಿವಕುಮಾರ್ ಹೊಸದಾಗಿ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯರಾಗಿದ್ದಾರೆ. ಹಾಗೆಂದು ಜನರನ್ನು ಮೆಚ್ಚಿಸೋಕೆ ಹೇಳಿಕೆ ನೀಡಬಾರದು. ಅವರಿಗೆ ಈ ಹಿಂದೆ ಲೂಟಿ ಮಾಡಿ ಅಭ್ಯಾಸ ಇದೆ. ಅದಕ್ಕೆ ಈಗಲೂ ಸರ್ಕಾರದಲ್ಲಿ ಲೂಟಿಯಾಗುತ್ತಿದೆ ಎಂದೆನಿಸುತ್ತಿದೆ. ಅವರು ಮಾಡ್ತಾ ಇದ್ದದ್ದು ಅದೆ ಅಲ್ವಾ ಅದಕ್ಕೆ ಹಾಗೆ ಅನಿಸುತ್ತೆ.

Leave A Reply

Your email address will not be published.