EBM News Kannada
Leading News Portal in Kannada

Kichcha Sudeep: ಶ್ರೀನಗರದ ಮತ್ತೊಂದು ವಿಡಿಯೋ ಹಂಚಿಕೊಂಡ ಕಿಚ್ಚ ಸುದೀಪ್​..!

ಕೊರೋನಾ ಲಾಕ್​ಡೌನ್​ ವಿಸ್ತರಿಸುತ್ತಿದ್ದಂತೆಯೇ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಸಕ್ರಿಯವಾಗಿದ್ದಾರೆ. ಅಭಿಮಾನಿಗಳಿಗೆ ಸೋಶಿಯಲ್​ ಮೀಡಿಯಾದ ಮೂಲಕವೇ ರಂಜಿಸುವ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್​ ಸಹ ಅಭಿಮಾನಿಗಳಿಗಾಗಿ ಈಗ ವಿಡಿಯೋ ಸಿರೀಸ್​ ಅನ್ನೇ ಆರಂಭಿಸಿದ್ದಾರೆ.

ಕಿಚ್ಚ ಸುದೀಪ್​ ಕಳೆದ ಕೆಲವು ದಿನಗಳಿಂದ ತಮ್ಮ ನೆನಪಿನ ಬುತ್ತಿಯಿಂದ ಒಂದೊಂದೇ ವಿಡಿಯೋಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದೂ ಸಹ ಅವರು ನಟಿಸಿರುವ ‘ಹೆಬ್ಬುಲಿ’ ಚಿತ್ರದ ಚಿತ್ರೀಕರಣದ ವೇಲೆ ಮಾಡಿರುವ ವಿಡಿಯೋಗಳು.

ಇತ್ತೀಚೆಗಷ್ಟೆ ಶ್ರೀನಗರದ ಸೌಂದರ್ಯವನ್ನು ವರ್ಣಿಸುತ್ತಾ…. ಭೂಮಿ ಮೇಲಿನ ಸ್ವರ್ಗವಾಗಿದ್ದ ಈ ನೆಲ ಈಗ ದುಸ್ವಪ್ನಗಳ ನೆಲವಾಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ ಒಂದು ವಿಡಿಯೋ ಹಂಚಿಕೊಂಡಿದ್ದರು. ಅಲ್ಲದೆ ಮೊನ್ನೆಯಷ್ಟೆ ಶ್ರೀನಗರಲ್ಲಿ ಚಿತ್ರೀಕರಣದಿಂದ ಬ್ರೇಕ್​ ಪಡೆದು ಕ್ರಿಕೆಟ್ ಆಡಿದ್ದ ವಿಡಿಯೋ ಪೋಸ್ಟ್​ ಮಾಡಿದ್ದರು.