ಅಜ್ಞಾನ, ವಿಪರ್ಯಾಸ ಎಂದು ಬೇರೊಬ್ಬ ನಟನ ಬಗ್ಗೆ ಚೇತನ್ ಟ್ವೀಟ್; ಪರ-ವಿರೋಧ ಚರ್ಚೆ
ಆ ದಿನಗಳು ಖ್ಯಾತಿಯ ಚೇತನ್ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳಿಂದಲೇ ಗುರುತಿಸಿಕೊಂಡಿರುವ ವ್ಯಕ್ತಿ. ಸಂಕಷ್ಟದಲ್ಲಿರುವ ಹಾಗೂ ಅನ್ಯಾಯಕ್ಕೆಒಳಗಾದವರ ಪರವಾಗಿ ಹೋರಾಟ ಮಾಡುತ್ತಿರುವ ಸಾಕಷ್ಟು ಸಲ ಟೀಕೆಗೂ ಒಳಗಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟ ಚೇತನ್ ಸದಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಂದು ವಿಷಯಗಳಲ್ಲಿ ತಮ್ಮ ನಿಲುವು ತಿಳಿಸಿದಕ್ಕಾಗಿಯೇ ಟ್ರೋಲ್ ಆಗಿದ್ದೂ ಇದೆ. ಇಂತಹ ನಟ ಈಗ ಮತ್ತೋರ್ವ ನಟನ ವಿರುದ್ಧವಾಗಿ ಹೆಸರೇಳದೆ ಟ್ವೀಟ್ ಮಾಡಿದ್ದಾರೆ. ಇದೀಗ ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.
ಹೌದು, ನಿನ್ನೆ ಎಲ್ಲರೂ ಅಂಬೇಡ್ಕರ್ ಜಯಂತಿಯ ಶುಭಾಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ನಟ ಧ್ರುವ ಸರ್ಜಾ ಸಹ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಆದರೆ ಈ ವಿಷಯವಾಗಿ ಚೇತನ್ ಧ್ರುವ ಸರ್ಜಾ ಅವರ ಹೆಸರನ್ನು ಉಲ್ಲೇಖಿಸದೆ ಒಂದು ಟ್ವೀಟ್ ಮಾಡಿದ್ದಾರೆ.